ಇಳೆಕೆರೆ ಸುತ್ತ ಪತ್ತೇದಾರಿ ಕಥಾ ಸರಣಿ-Released all Episodes_[Watch now]___Updating..."[Read more]

ದೇಶ ಭಕ್ತಿಯ - ವೀರರು ಅಮರರು


ಒಂದುವರೆ ತಿಂಗಳ ಪರಿಪೂರ್ಣ ಪ್ರಾಕ್ಟೀಸ್ ಜೊತೆಗೆ ಸೆಟ್ಟೇರಿದ “ವೀರರು ಅಮರರು” ವಿಶೇಷ ಕಾರ್ಯಕ್ರಮ ಕಾರ್ಗಿಲ್ ವಿಜಯೋತ್ಸವದ ದಿನ ಬಿಡುಗಡೆಯಾಗಲಿದೆ. ಕುಮಾರೇಶ್ ಕಣಿಯೂರು ಸಾರಥ್ಯದ ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರೀವಂತದ ಪ್ರತಿಭಾವಂತ ಪುಟಾಣಿಗಳಾದ ಕಿಡ್ ಮಾಡೆಲ್ ಸನ್ಮಿತಾ, ವೈಷ್ಣವಿ ಉಜಿರೆ, ಧನ್ವಿ ಪಾಣಾಜೆ, ಅರ್ಚನಾ ಎಸ್ ಸಂಪ್ಯಾಡಿ, ವೈಷ್ಣವಿ ಪುತ್ತೂರು, ಮನ್ವಿತಾ ಸುಳ್ಯ ಹಾಗೂ ಭವಿತ್ ಭಾಗವಹಿಸುತ್ತಿದ್ದಾರೆ. 

ಪರಿಶ್ರಮದ ಪ್ರಯಾಣ.

ಹೌದು. ವೀರರು ಅಮರರು ಕಾರ್ಯಕ್ರಮಕ್ಕಾಗಿ ಇಡೀ ಕಾರ್ಯಕ್ರಮ ತಂಡದ ಪರಿಶ್ರಮವಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ 7 ಮಂದಿ ಪುಟಾಣಿಗಳ ತಯಾರಿ ಅದ್ಭುತವಾಗಿತ್ತು. ಅಷ್ಟೇ ಪ್ರೀವಂತದಿoದ ತರಬೇತಿಯನ್ನು ನೀಡಲಾಗಿತ್ತು.

ಪ್ರಾಕ್ಟಿಕಲ್ ಪ್ರಾಕ್ಟಸ್ ಲ್ಲಿ ಪುಟಾಣಿಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗಿತ್ತು.

ಆಡಿಯೋ ಕ್ವಾಲಿಟಿಗಾಗಿ ವಿಶೇಷ ರೀತಿಯ ಡಬ್ಬಿಂಗ್

ವೀರರು ಅಮರರು ಕಾರ್ಯಕ್ರಮದಲ್ಲಿ ಆಡಿಯೋ ಕ್ವಾಲಿಟಿಗಾಗಿ ವಿಶೇಷ ರೀತಿಯ ಡಬ್ಬಿಂಗ್ ನ್ನು ಮಾಡಲಾಗಿದೆ. ಈ ಕಾರ್ಯಕ್ರಮದ ಶೂಟಿಂಗ್ ಹಾಗೂ ಡಬ್ಬಿಂಗ್ ನಲ್ಲಿ ಪುಟಾಣಿಗಳು ತಮಗೆ ನೀಡಿದ್ದ ಸ್ಕ್ರಿಪ್ಟ್ ನ್ನು ನೋಡದೇ ಹೇಳಿದ್ದು ವಿಶೇಷವಾಗಿದೆ.

ದೇಶದ ಕಾರ್ಯಕ್ರಮ ಎನ್ನುವ ಹೆಮ್ಮೆ.

ಹೌದು. ಈ ಕಾರ್ಯಕ್ರಮವನ್ನು ಮಾಡುತ್ತಿರುವುದು ಪ್ರೀವಂತ ಕ್ರಿಯೇಟಿವ್ ಸೆಂಟರ್ ಆಗಿದ್ರೂ, ಈ ಕಾರ್ಯಕ್ರಮ ದೇಶದ ಸೇನೆಯ, ಸೈನಿಕರಿಗೆ ಸಂಬoಧಿಸಿರುವುದರಿoದ, ವೀರರು ಅಮರರು ಕಾರ್ಯಕ್ರಮ ದೇಶದ ಕಾರ್ಯಕ್ರಮ ಎಂದು ಹೇಳಬಹುದು.

ಒಟ್ಟಿನಲ್ಲಿ ಬಹು ನಿರೀಕ್ಷಿತ ವಿಶೇಷ ಕಾರ್ಯಕ್ರಮ “ವೀರರು ಅಮರರು” ಇದೇ ಜುಲೈ 26 ಕ್ಕೆ ವೀಕ್ಷಣೆಗೆ ಲಭ್ಯವಾಗಲಿದೆ. ಎಲ್ಲರೂ ನೋಡಿ, ದೇಶದ ಕಾರ್ಯಕ್ರಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ.